Thursday, February 4, 2010

ಸಾ. ಹೇಮಂತ ಕುಮಾರ


ಬಿಡಾರ ಮಹಾರಾಜರದ್ದು ಬಿಡದಿ. ಇವನಿಗೆ ಬಸವನಗುಡಿಯ ನ್ಯಾಷನಲ್ ಕಾಲೇಜು ಎರಡನೇ ಮನೆಯಿದ್ದ ಹಾಗೆ. ಅಲ್ಲೇ ಬಿಎಸ್ಸಿ ವ್ಯಾಸಂಗ, ಸದ್ಯ ಈಗ ಬೆಂಗಳೂರು ವಿವಿಯಲ್ಲಿ ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಎಂಎಸ್ಸಿ ಕೃಷಿ.

ಬರೀ ಓಡಾಟವೇ ಇವನ ಜೀವನ
ಬಸ್ಸಲ್ಲೇ ಓದು ನಿದ್ದೆ, ಬರೀತಿರ್ತಾನೆ ಕವನ;
ಎಲ್ಲದರಲ್ಲೂ ಸ್ವಲ್ಪ ಹೆಚ್ಚೇನೇ ಹುಮ್ಮಸ್ಸು
ಇದ್ರಿಂದಾನೇ ಗೆಳೆಯರಿಗೆ ಇವನ್ಮೇಲೆ ಮುನಿಸ್ಸು.


ನಾಟಕ, ನಟನೆ, ನಿರ್ದೇಶನ, ಬಿಟ್ಟಿಲ್ಲ ಯಾವ ಜಾಗ
ಕಾಲೇಜು-ಓದು-ಬರಹ ನಡೆಯುತ್ತೆ ಆಗಾಗ;
ಸಾಕ್ಷ್ಯಚಿತ್ರ, ಸಾಹಿತ್ಯದ ಹುಚ್ಚು ಹತ್ತಿದೆ ಈಗೀಗ
ಕ್ರೀಯಾಶೀಲತೆ-ಕಲಾತ್ಮಕತೆ ಬದುಕಿನ ಭಾಗ.

ಇವನ್ದೂ ಒಂದು ಬ್ಲಾಗ್ ಇದೆ. ಓದೇ ಸವಿಯಬೇಕು ಪಾಪು ಪುಟ.
http://papuputa.blogspot.com

1 comments:

ಜಲನಯನ said...

HI Hemant
welcome to blog LOKA...
I am Dr. Azad of www.jalanayana.blogspot.com.
Aditya is my blog friend.
azad